ಶಹಾಬಾದ್ನಲ್ಲಿ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿಯ ಮಹಾ ಪಡಿಪೂಜೆ ಹಾಗೂ ಕುಂಕುಮಾರ್ಚನೆ ಕಾರ್ಯಕ್ರಮ.
ಶಹಾಬಾದ್ ಪಾರ್ವತಿ ಕಲ್ಯಾಣ ಮಂಟಪದಲ್ಲಿ
ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿಯ ಮಹಾ ಪಡಿಪೂಜೆ, ಕುಂಕುಮಾರ್ಚನೆ
ಶಹಾಬಾದ್
ನಗರದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಅಯ್ಯಪ್ಪ ಸ್ವಾಮಿ ಸನ್ನಿಧಿಯ ವತಿಯಿಂದ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿಯವರ ವಿಶೇಷ ಪೂಜಾ ಕೈಂಕರ್ಯಗಳು, ಮಹಾ ಪಡಿಪೂಜೆ ಹಾಗೂ ಕುಂಕುಮಾರ್ಚನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮಕರ ಸಂಕ್ರಾAತಿಯ ನಂತರದ ಈ ಪುಣ್ಯಕಾಲದಲ್ಲಿ ನಡೆಯುವ ಪಡಿಪೂಜೆಯು ಅತ್ಯಂತ ಪವಿತ್ರವಾಗಿದ್ದು, ಹದಿನೆಂಟು ಮೆಟ್ಟಿಲುಗಳಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ದೀಪಾರಾಧನೆಯೊಂದಿಗೆ ಶಾಸ್ತ್ರೋಕ್ತವಾಗಿ ನೆರವೇರಲಿದೆ. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆಯಿಂದಲೇ ಗಣಪತಿ ಪೂಜೆ, ಅಭಿಷೇಕ ಹಾಗೂ ಭಕ್ತಾದಿಗಳಿಂದ ಸಾಮೂಹಿಕ ಕುಂಕುಮಾರ್ಚನೆ ಜರುಗಲಿದೆ.
ನಡೆಯುವ ಮಹಾ ಪಡಿಪೂಜೆಯಲ್ಲಿ ಭಜನಾ ಮಂಡಳಿಗಳಿAದ ಭಜನೆ ಹಾಗೂ ನಂತರ ಮಹಾಪ್ರಸಾದ ವಿನಿಯೋಗವಿರುತ್ತದೆ. ನಗರದ ಹಾಗೂ ಸುತ್ತಮುತ್ತಲಿನ ಅಯ್ಯಪ್ಪ ಮಾಲಾಧಾರಿಗಳು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಶಹಾಬಾದ ಅಯ್ಯಪ್ಪ ಸ್ವಾಮಿ ಸನ್ನಿಧಿಯ ಸೇವಾ ಸಮಿತಿ ಪದಾಧಿಕಾರಿಗಳು ವಿನಂತಿಸಿದೆ.
ಮಲ್ಲಿಕಾರ್ಜುನ ಇಂಗಳೇಶ್ವರ ಗುರುಸ್ವಾಮಿ, ಬಸವರಾಜ ಶೇರಿಕರ ಸ್ವಾಮಿ, ಡಾ.ವೆಂಕಟೇಶ ನಾಯಕೋಡಿ ಸ್ವಾಮಿ, ಡಾ.ಸಂಜಯ ಜಿಂಗಾಡೆ ಸ್ವಾಮಿ, ಬಸವರಾಜ ರೆಡ್ಡಿ ಸ್ವಾಮಿ, ಸುರೇಶ ಕುಂಟನಸ್ವಾಮಿ ಅವರು ಮಾಹಿತಿ ನೀಡಿದರು.
ಪ್ರಮುಖ ಪೂಜೆಗಳು: ಮಹಾ ಪಡಿಪೂಜೆ, ಕುಂಕುಮಾರ್ಚನೆ, ಭಜನೆ ಹಾಗೂ ಪ್ರಸಾದ ವಿನಿಯೋಗ ಹೆಚ್ಚಿನ ಮಾಹಿತಿಗಾಗಿ ಅಥವಾ ಸಂಪರ್ಕಕ್ಕೆ:9632485501- 9448651899 - 9880219075
Copyright © 2026 Vijay Times News. All Rights Reserved.
Website by Samanth