ಆಸ್ಪತ್ರೆ ಸಮಸ್ಯೆಗಳತ್ತ ಕಣ್ಣೇತ್ತಿ ನೋಡದ ಡಿಸಿ.
೨೦ ನಿಮಿಷದಲ್ಲಿ ಪರಶೀಲನೆ ಮುಕ್ತಾಯ
ವಿಜಯ ಟೈಮ್ಸ್ ನ್ಯೂಸ್ ಕಲಬುರಗಿ
ತಾಲೂಕ ಕೇಂದ್ರ ಸಮುದಾಯ ಆಸ್ಪತ್ರೆಗೆ ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಅವರು ಏಕಾಏಕಿ ಭೇಟ್ಟಿ ನೀಡಿ, ಇಲ್ಲಿಯ ವೈದ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಆಸ್ಪತ್ರೆ ಸಮಸ್ಯೆಗಳತ್ತ ಕನಿಷ್ಠ ಕಣ್ಣೇತ್ತಿ ನೋಡದೆ ೧೦-೧೫ ನಿಮಿಷದಲ್ಲಿಯೇ ಪರಿಶೀಲನೆ ಪ್ರಕ್ರಿಯೇ ಮುಗಿಸಿ, ಕಾರು ಹತ್ತಿದ್ದಾರೆ.
ಮಂಗಳವಾರ ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಚಿತ್ತಾಪುರ ತಾಲೂಕಿನ ಕೆಲ ಆಸ್ಪತ್ರೆಗಗಳಿಗೆ ಭೇಟ್ಟಿ ನೀಡಿ, ಅಲ್ಲಿಂದ ಶಹಾಬಾದ ಆಸ್ಪತ್ರೆಗೆ ಆಗಮಿಸಿದ್ದಾರೆ. ಬಂದವರೆ ನೇರವಾಗಿ ಹೆರಿಗೆ ವಿಭಾಗಕ್ಕೆ ಭೇಟ್ಟಿ ನೀಡಿ, ಅಲ್ಲಿಂದ ವೈದ್ಯಾಧಿಕಾರಿಗಳ ಕಚೇರಿಗೆ ಹೋಗಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ನಂತರ ಅಲ್ಲಿಂದ ಹೊರ ಹೋಗಿದ್ದಾರೆ.
ಅದರೆ, ಆಸ್ಪತ್ರೆಯ ಸಮಸ್ಯೆಗಳನ್ನು ನೋಡದೆ ಹಾಗೇ ಹೋಗಿರುವದು ಎಷ್ಟು ಸಮಂಜಸ ಎಂಬುವದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಅಸ್ಪತ್ರೆಯಲ್ಲಿರುವ ಶೌಚಾಲಯ ಕನಿಷ್ಠ ಸ್ವಚ್ಚತೆ ಇಲ್ಲದೆ ಇರುವದನ್ನು ನೋಡದೆ ಹಾಗೇ ಹೋಗಿದ್ದಾರೆ. ಅಲ್ಲದೆ, ಕಳೆದ ಮೂರು ತಿಂಗಳ ಹಿಂದೆ ಲೋಕಾಯುಕ್ತ ಎಸ್ಪಿ ಅಂಟೋನಿ ಜಾನ್ ಅವರು ಆಸ್ಪತ್ರೆಗೆ ಭೇಟ್ಟಿ ನೀಡಿದ್ದಾಗ, ಇಲ್ಲಿಯ ಶುದ್ದ ಕುಡಿಯುವ ನೀರಿನ ಘಟಕ ಕಾರ್ಯನಿರ್ವಹಿಸದೆ ಇರವದನ್ನು ಕಂಡು, ಅದನ್ನು ಶೀಘ್ರದಲ್ಲಿ ದುರಸ್ತಿಗೊಳಿಸಿ, ಆಸ್ಪತ್ರೆಗೆ ಆಗಮಿಸುವ ಸಾರ್ವಜನಿಕರಗೆ ಉಪಯೋಗಿವಾಗುವಂತೆ ಕ್ರಮ ಕೈಗೊಳ್ಳಲು ಸ್ಥಳದಿಂದಲೇ ಫೋನ್ ಮುಖಾಂತರ ತಾಲೂಕ, ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಮೂರು ತಿಂಗಳಾಗದರು ಇತ್ತ ನೋಡದೆ ಇರುವದನ್ನು ಡಿಸಿ ಯವರೂ ಪರಿಶೀಲನೆ ನಡೆಸಲೇ ಇಲ್ಲಾ,
ತ್ಯಾಜ್ಯ ಸುಟ್ಟ ಸಿಬ್ಬಂದಿ
ಆಸ್ಪತ್ರೆಯ ಹಿಂದುಗಡೆ ಆಸ್ಪತ್ರೆಯ ತ್ಯಾಜ್ಯವನ್ನು ಹಾಕಲು ನಿರ್ಮಿಸಿರುವ ಸ್ಥಳದಲ್ಲಿ ವೈದ್ಯಕೀಯ ನಿಯಮದಂತೆ ಸಿರೀಂಜ್, ಹ್ಯಾಂಡ್ಗ್ಲೋಸ್, ಔಷಧಿಯ ಗಾಜಿನ ಬಾಟಲಿಗಳನ್ನು ಸೂಕ್ತ ವಿಲೇವಾರಿ ಮಾಡದೆ ಅವುಗಳನ್ನು ತ್ಯಾಜ್ಯ ಎಸೆಯುವ ತಿಪ್ಪೆಯಲ್ಲಿ ಹಾಕಿ ಸುಟ್ಟಿದ್ದನು ಜಿಲ್ಲಾಧಿಕಾರಿಗಳ, ಜಿಲ್ಲಾ, ತಾಲೂಕ ವೈದ್ಯಾಧಿಕಾರಿಗಳ ಗಮನಕ್ಕೆ ಬರಲೆ ಇಲ್ಲ.
ಲೋಕಾಯುಕ್ತರ ಕಿಮ್ಮತ್ತಿಲ್ಲ
ಕಳೆದ ಮೂರು ತಿಂಗಳ ಹಿಂದೆ ಆಸ್ಪತ್ರೆಗೆ ಭೇಟ್ಟಿ ನೀಡಿದ್ದ ಲೋಕಾಯುಕ್ತರು ಆಸ್ಪತ್ರೆ ಸುತ್ತಲಿನ ಪರಿಸರದಲ್ಲಿ ಗಿಡಗಂಟಿ ಬೆಳೆದಿದ್ದನ್ನು ನಗರ ಸಭೆ ಸಿಬ್ಬಂದಿ ಸಹಕಾರದಿಂದ ಸ್ವಚ್ಚಗೊಳಿಸಿ ಎಂದು ಹೇಳಿದ್ದರು. ಇನ್ನೂ ಹಾಗೆ ಇರುವದು ಕಂಡು ಬಂದಿತ್ತು.
ಜಿಲ್ಲಾಧಿಕಾರಿಗಳೊAದಿಗೆ ತಹಶೀಲ್ದಾರ ಜಗದೀಶ ಚೌರ, ಜಿಲ್ಲಾ, ತಾಲೂಕ ವೈದ್ಯಾಧಿಕಾರಿಗಳು, ಸ್ಥಳೀಯ ವೈದರು, ಸಿಬ್ಬಂದಿ ವರ್ಗ, ಪಿಐ ನಟರಾಜ ಲಾಡೆ ಇದ್ದರು.
Copyright © 2025 Vijay Times News. All Rights Reserved.
Website by Samanth