ಶಹಾಬಾದ ನಗರದಲ್ಲಿ ದಸರಾ ಕ್ರೀಡಕೂಟ
ಶಹಾಬಾದ
ತಾಲೂಕು, ನಗರದ ಕ್ರೀಡಾ ಪಟುಗಳು ತಾಲೂಕ, ಜಿಲ್ಲಾ ಮಟ್ಟದಲ್ಲಿ ಯಶಶ್ವಿಯಾಗಿ ರಾಜ್ಯ ಮಟ್ಟದಲ್ಲಿ ಗೆಲವು ಸಾಧಿಸಬೇಕೆಂದು ನಗರ ಸಭೆ ನೂತನ ಅಧ್ಯಕ್ಷ ಚಂಪಾಬಾಯಿ ಮೇಸ್ತಿç ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು. ಅವರು ನಗರದ ಬಾಲವಿದ್ಯಾ ಮಂದಿರ ಕ್ರೀಡಾಂಗಣದಲ್ಲಿ ತಾಲೂಕ ಮಟ್ಟದ ದಸರಾ ಕ್ರೀಡಾ ಕೂಟವನ್ನು ಧ್ಯಾನ್ಚಂದ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಉದ್ಘಾಟಿಸಿ, ಶುಭ ಹಾರೈಸಿದರು. ತಾಲೂಕ ದೈಹಿಕ ಶಿಕ್ಷಕ ಸಂಘದ ಪರಿವೀಕ್ಷಕ ಶಿವಶರಣಪ್ಪ ಮಂಠಾಳೆ ದ್ವಜಾರೋಹಣ ನೇರವೇರಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ ಕ್ರೀಡಾಜ್ಯೋತಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಚನ್ನಬಸಪ್ಪ ಕೊಲ್ಲೂರ, ಮರೆಪ್ಪ ಬೊಮ್ಮನಳ್ಳಿ, ತಾಲೂಕ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಬನ್ನಪ್ಪ ಸೈದಾಪುರ, ವಿಜಯಲಕ್ಷಿö್ಮÃರಾಣಿ ಹಿರೇಮಠ, ಗಣೇಶ ಜಾಯಿ, ಶಿವಗಂಗಾ, ರಹೇನಾ ಪರ್ವೀನ್, ಸುರೇಶ ಕಾಂಬಳೆ, ರತನರಾಜ ಕೋಬಾಳಕರ, ಮಹೇಶ ಸೇರಿದಂತೆ ಕ್ರೀಡಾ ಪಟುಗಳ ಭಾಗವಹಿಸಿದ್ದರು.
Copyright © 2025 Vijay Times News. All Rights Reserved.
Website by Samanth