ಶಹಾಬಾದ ನಗರ ಸಭೆ ಕಚೇರಿಯ ಮುಂದೆ ಇರುವ ಡಾ.ಅಂಬೇಡ್ಕರ ಪುತ್ಥಳಿಗೆ ನಗರ ಸಭೆ ಅಧ್ಯಕ್ಷೆ ಚಂಪಾಬಾಯಿ ಮೇಸ್ತಿç ಮಾಲಾರ್ಪಣೆ ಮಾಡಿದರು. ಡಾ.ಎಂ.ಎ.ರಶೀದ, ಜಗದೀಶ ಚೌರ, ಮಲ್ಲಿನಾಥ ರಾವೂರ, ಡಾ.ಕೆ.ಗುರುಲಿಂಗಪ್ಪ, ಮರೆಪ್ಪ ಹಳ್ಳಿ ಇತರರು ಇದ್ದರು.
ಶಹಾಬಾದ ವಿಜೃಂಭಣೆಯ ಡಾ.ಅಂಬೇಡ್ಕರ ಜಯಂತಿ.
ವಿಜಯ ಟೈಮ್ಸ್ ನ್ಯೂಸ್ ಕಲಬುರಗಿ
ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಅವರ ೧೩೪ನೇ ಜಯಂತೋತ್ಸವ ವಿಜೃಂಭಣೆಯಿAದ ನಡೆಯಿತು. ಸರಕಾರಿ ಕಚೇರಿ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ, ವೃತ್ತಗಳಲ್ಲಿ ಡಾ.ಅಂಬೇಡ್ಕರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಲಾಯಿತು. ಯುವಕರಿಂದ ಬೈಕ್ ರ್ಯಾಲಿ ನಡೆಯಿತು. ನಗರ ಸಭೆ ಕಚೇರಿಯಲ್ಲಿ ಅಧ್ಯಕ್ಷೆ ಚಂಪಾಬಾಯಿ ಮೇಸ್ತಿç ಡಾ.ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಕಚೇರಿಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಜಗದೀಶ ಚೌರ, ಜಿಲ್ಲಾ ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ, ತಾಪಂ.ಇಒ ಮಲ್ಲಿನಾಥ ರಾವೂರ, ಗ್ರೇಡ್ -೨ ತಹಶೀಲ್ದಾರ ಗುರುರಾಜ ಸಂಗಾವಿ, ಪೌರಾಯುಕ್ತ ಡಾ.ಕೆ.ಗುರುಲಿಂಗಪ್ಪ, ಎಇಇ ಶರಣು ಪೂಜಾರಿ, ನಗರ ಸಭೆ ಉಪಾಧ್ಯಕ್ಷೆ ಫಾತೀಮಾ ಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷೆ ಪೀರಮ್ಮಾ ಪಗಲಾಪುರ, ದಸಂಸ ರಾಜ್ಯ ಸಂ.ಸAಚಾಲಕ ಮರೆಪ್ಪ ಹಳ್ಳಿ, ಕರಾದಸಂಸ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಕರಣಿಕ, ನಿಂಗಣ್ಣ ಪೂಜಾರಿ, ಸುರೇಶ ಮೆಂಗನ್, ಶಿವರಾಜ ಕೋರೆ, ಶಂಕರ ಅಳ್ಳೊಳ್ಳಿ, ವಿಜಯಕುಮಾರ ಹಳ್ಳಿ, ನಾಗರಾಜ ಸಿಂಘೆ, ಸಾಹೇಬಗೌಡ ಬೊಗುಂಡಿ, ಕಿರಣ ಕೋರೆ, ಶರಣು ಪಗಾಲಾಪುರ, ಬಾಕ್ರೋದ್ದಿನ್ ಸೇಠ್,ಡಾ.ಅಹ್ಮದ ಪಟೇಲ, ಸಾಬೇರಾ ಬೇಗಂ, ನಾಗೇಂದ್ರ ಕರಣಿಕ, ಸೇರಿದಂತೆ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಜಯಂತೋತ್ಸವ ನಿಮಿತ್ತ ತಾಪಂ. ಪಂಚಾಯತ ಕಚೇರಿಯಲ್ಲಿ ಹಾಗೂ ಬಸವೇಶ್ವರ ವೃತ್ತದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಡಿವೈಎಸ್ಪಿ ಕಚೇರಿಯಲ್ಲಿ ಡಿವೈಎಸ್ಪಿ ಶಂಕರಗೌಡ ಪಾಟೀಲ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪೊಲೀಸ್ ಠಾಣೆಯಲ್ಲಿ ಪಿಐ ನಟರಾಜ ಲಾಡೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಿಬ್ಬಂದಿ ವರ್ಗದವರು ಇದ್ದರು.
Copyright © 2025 Vijay Times News. All Rights Reserved.
Website by Samanth