ಶಹಾಬಾದ ನಗರದಲ್ಲಿ ಸ್ಕೂಪ್ಸ್ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ ಅವರ ೧೩೪ನೇ ಜನ್ಮದಿನೋತ್ಸವ ಅಂಗವಾಗಿ "ಅಂಬೇಡಕರ ಅವರ ಪ್ರಬುದ್ದ ಭಾರತ ಮತ್ತು ಮಹಿಳೆ" ಹಾಗೂ ಆದರ್ಶ ಭೀಮ ಪ್ರಶಸ್ತಿ" ಪ್ರಧಾನ ಕಾರ್ಯಕ್ರಮವನ್ನ ಮರೆಪ್ಪ ಹಳ್ಳಿ, ಪುಷ್ಪ ನಮನ ಸಲ್ಲಿಸಿ, ಉದ್ಘಾಟಿಸಿದರು. ಜಗದೀಶ ಚೌರ, ಡಾ.ಕರಿಗೂಳೇಶ್ವರ, ವಿಜಯಲಕ್ಷಿö್ಮÃ ಪಾಟೀಲ, ಶಂಕರ ಅಳ್ಳೊಳ್ಳಿ ಇತರರು ಇದ್ದರು.
ಹೆಣ್ಣು ಮಕ್ಕಳಲ್ಲಿ ಪ್ರಭುದ್ದತೆ ಬರಬೇಕು.
ವಿಜಯ ಟೈಮ್ಸ್ ನ್ಯೂಸ್ ಕಲಬುರಗಿ
ಹೆಣ್ಣು ಮಕ್ಕಳು ಇಂದು ಗ್ರಾಪಂ. ಅಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವದಕ್ಕೆ ಡಾ.ಅಂಬೇಡ್ಕರ ಅವರ ಸಂವಿಧಾನವೇ ಕಾರಣವಾಗಿದೆ. ಈ ಕುರಿತು ಮಹಿಳೆಯರು ಆತ್ಮಾವಲೋಕನ ಮಾಡಿಕೊಳ್ಳಬೇಕು, ಅದಕ್ಕಾಗಿ ಹೆಣ್ಣು ಮಕ್ಕಳಲ್ಲಿಯೇ ಪ್ರಬುದ್ದತೆ ಬರಬೇಕು ಎಂದು ಮಹಾಗಾಂವ ಕ್ರಾಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ, ಸಂಶೋಧಕ ಮಾರ್ಗದರ್ಶಕರಾದ ಡಾ.ಕರಿಗೂಳೇಶ್ವರ ಹೇಳಿದರು.
ಅವರು ನಗರದ ಎಸ್.ಎಸ್.ಮರಗೋಳ ಮಹಾವಿದ್ಯಾಲಯದಲ್ಲಿ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ ಅವರ ೧೩೪ನೇ ಜನ್ಮದಿನೋತ್ಸವ ಅಂಗವಾಗಿ "ಅಂಬೇಡಕರ ರವರ ಪ್ರಬುದ್ದ ಭಾರತ ಮತ್ತು ಮಹಿಳೆ" ಹಾಗೂ ಆದರ್ಶ ಭೀಮ ಪ್ರಶಸ್ತಿ" ಪ್ರಧಾನ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡುತ್ತ, ಅಂಬೇಡ್ಕರ ಅವರು ದೇಶದಲ್ಲಿ ಅತಿ ಹೆಚ್ಚು ಶೋಷಣೆಗೆ ಒಳಗಾದವಳು ಮಹಿಳೆ ಎಂದು ತಿಳಿದು ಅದಕ್ಕಾಗಿಯೇ ಸಂವಿಧಾನದಲ್ಲಿ ಶೇ. ೫೦ ರಷ್ಟು ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದರು, ಒಬಿಸಿ ಮಹಿಳಾ ಮೀಸಲಾತಿ ಹಿಂದೂ ಕೋಡ್ ಬಿಲ್ ಸಂಸತ್ನಲ್ಲಿ ಬಿದ್ದು ಹೋಗುತ್ತದೆ ಎಂದು ಗೊತ್ತಾದಾಗ ಅವರು ತಮ್ಮ ಸ್ಥಾನಕ್ಕೆ ರಾಜೇನಾಮೆ ನೀಡಿದ್ದರು. ಮಹಿಳೆಯರು ಬುದ್ದ ಬಸವ, ಅಂಬೇಡ್ಕರ ಅವರನ್ನು ಅರ್ಥ ಮಾಡಿಕೊಂಡು ಬದಲಾವಣೆ ಮಾಡಿಕೊಳ್ಳಬೇಕು, ಪ್ರಬುದ್ದತೆ ಕೇವಲ ಮಹಿಳೆಯರಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಉದ್ಘಾಟನೆ ನೇರವೇರಿಸಿದ ದಸಂಸ ರಾಜ್ಯ ಸಂ.ಸAಚಾಲಕ ಮರೆಪ್ಪ ಹಳ್ಳಿ ಮಾತನಾಡಿ ಮಹಿಳೆಯರಿಗಾಗಿ ಬುದ್ದ, ಬಸವ ಅವರು ಕೊಟ್ಟ ಸಂದೇಶವನ್ನು ಡಾ.ಅಂಬೇಡ್ಕರ ಅವರು ಸಂವಿಧಾನದ ಮೂಲಕ ಕೊಟ್ಟಿದ್ದಾರೆ, ಸ್ವಾತಂತ್ರö್ಯ ಬಂದು ೭೫ ವರ್ಷದ ನಂತರ ಇಂದು ಜಿಪಂ.ತಾಪA.ಗ್ರಾಪA.ಗಳಲ್ಲಿ ಮಹಿಳೆಯರಿಗೆ ಸಮಾನತೆ ದೊರಕುತ್ತಿದೆ, ಸಮ ಸಮಾಜ ನಿರ್ಮಾಣವಾಗಬೇಕಾದರೆ, ಬುದ್ದ, ಬಸವ ತತ್ವಗಳು, ಅಂಬೇಡ್ಕರ ಅವರ ಸಂವಿದಾನದ ಆಶಯಗಳ ಪ್ರಚಾರ ಆಗಬೇಕು ಎಂದು ಹೇಳಿದರು.
೧೩೪ನೇ ಜಯಂತೋತ್ಸವ ಗೌರವ ಅಧ್ಯಕ್ಷ ಸುರೇಶ ಮೆಂಗನ್, ಸ್ಕೂಪ್ಸ್ನ ಜಿಲ್ಲಾ ಅಧ್ಯಕ್ಷ ಗುರುಪಾದ ಕೋಗನೂರ, ಶಿವಶರಣಪ್ಪ ಮಂಠಾಳೆ ಮಾತನಾಡಿದರು. ವೇದಿಕೆ ಮೇಲೆ ತಹಶೀಲ್ದಾರ ಜಗದೀಶ ಚೌರ, ೧೩೪ನೇ ಜಯಂತೋತ್ಸವ ಸಮಿತಿ ಅಧ್ಯಕ್ಷ ಶಂಕರ ಅಳ್ಳೊಳ್ಳಿ, ಡಾ.ಚಿದಾನಂದ ಕುಡ್ಡನ್, ಪ್ರವೀನ ಹೇರೂರ, ಕೃಷ್ಣಪ್ಪ ಕರಣಿಕ, ಶರಣಬಸಪ್ಪ ಕೋಬಾಳ, ಪ್ರೊ.ಕೆ.ಬಿ.ಬಿಲ್ಲವ್, ನರೇಂದ್ರ ವರ್ಮಾ, ರವಿಕುಮಾರ ಹಾದಿಮನಿ,ವಿಶಾಲ್ ಕುಮಾರ ಜಿಡಗೆ, ಸೇರಿದಂತೆ ರಾಜ್ಯ,ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದು. ವಿಜಯಲಕ್ಷಿö್ಮÃ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಶರಣಕುಮಾರ ಪ್ರಾರ್ಥಿಸಿದರು, ಸುರೇಕಾ ಪ್ರಾಸ್ತಾವಿಕ ಮಾತನಾಡಿದರು. ಸಾಮೂಹಿಕ ಸಂವಿಧಾನ ಪೀಠಿಕೆ ಓದಲಾಯಿತು. ಸುಮಂಗಲಾ ನಿರೂಪಿಸಿದರು. ಶಂಕರ ಜಾನಾ ಸಂಗಡಿಗರಿAದ ಭೀಮ ಗೀತೆ, ಕು.ಜಮುನಾ ಅವರಿಂದ ಭರತ ನಾಟ್ಯ, ಡಿ.ಸ್ಪೀರಿಟ್ ಡಾನ್ಸ್ ಅಕೆಡೆಮಿ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.
..................
ಪ್ರಶಸ್ತಿ ಪುರಸ್ಕೃತರು
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮರೆಪ್ಪ ಹಳ್ಳಿ, ಕೃಷ್ಣಪ್ಪ ಕರಣಿಕ, ಬಸವರಾಜ ಮಯೂರ, ಶಂಕರ ಅಳ್ಳೊಳ್ಳಿ, ಸುರೇಶ ಮೆಂಗನ್, ಪತ್ರಕರ್ತ ಲೋಹಿತ ಕಟ್ಟಿ, ಸತೀಶ ಕೋಬಾಳಕರ್, ಮಹಾದೇವ ನಾಲವಾರ, ಶಂಕರ ಜಾನಾ, ನಾಗೇಂದ್ರ ಹುಗ್ಗಿ, ರಾಜೇಶ ಯನಗುಂಟಿಕರ್, ಮಲ್ಲಿಕಾರ್ಜುನ ಕಟ್ಟಿಮನಿ, ಶರಣಬಸಪ್ಪ ಕೋಬಾಳ, ಡಾ.ಅಹ್ಮದ ಪಟೇಲ, ಇಮಾನ್ ವೆಲ್ ಜಾನ್ ಪಾಲ್, ಶಿವುಕುಮಾರ ತಳವಾರ, ನಿಂಗಣ್ಣ ಪೂಜಾರಿ, ಕಿರಣ ಚವ್ಹಾಣ, ಸುನೀಲ ಭಗತ್, ವಿಕ್ರಮ ಮಾಲಗತ್ತಿ, ಬಲಭೀಮ ಕೊಳ್ಳೊಳ್ಳಿ, ಮಲ್ಲಿಕಾರ್ಜುನ ಜಲಂಧರ, ರಾಣಪ್ಪ ಸಂಗನ್, ದತ್ತಪ್ಪ ಕೊಟ್ನೂರ ಗಿರಿಮಲ್ಲ÷್ಪ ವಳಸಂಗ, ಗಂಗಾಧರಪ್ಪ, ಸುನೀತಾ ಕೋರೆ, ಲಕ್ಷಿö್ಮÃ ಪುನೀತ್, ಪ್ರಮೋದ ನಾಟೀಕಾರ, ಮಹಾದೇವ ಮೇತ್ರಿ, ಸಿದ್ದಲಿಂಗಮ್ಮ, ಅಂಬಿಕಾ, ಪ್ರವೀನ ರಾಜನ್, ಡಾ. ಹಣಮಂತಪ್ಪ ಸೇಡಂಕರ್, ಅನೀಲ ಮೈನಾಳಕರ್, ಶಿವಯೋಗಿ ಹೊನ್ನಾನೂರ್, ಝಾಕಿರ ಹುಸೇನ ಕಪನೂರ, ವಿಜಯಕುಮಾರ ಜಡಗೆ, ಸಿದ್ದಲಿಂಗ ಡೆಂಗಿ, ಗುರಣ್ಣ ಅವಂಟಿ ಅವರನ್ನು "ಆದರ್ಶ ಭೀಮ ಪ್ರಶಸ್ತಿ" ನೀಡಿ ಗೌರವಿಸಲಾಯಿತು.

Copyright © 2026 Vijay Times News. All Rights Reserved.
Website by Samanth