ಕಸಾಪ ತಾಲೂಕ ಸಮ್ಮೇಳನ ಪೂರ್ವಭಾವಿ ಸಭೆ
ಅರ್ಥಪೂರ್ಣ ಸಮ್ಮೇಳನಕ್ಕೆ ಅಸ್ತು.
ವಿಜಯ ಟೈಮ್ಸ್ ನ್ಯೂಸ್ ಕಲಬುರಗಿ
ನಗರದ ಪಾರ್ವತಿ ಸಭಾಗೃಹದಲ್ಲಿ ನಡೆದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಹಾಬಾದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಪ್ರಥಮ ಸಮ್ಮೇಳನ ನಡೆಸಲು ಕರೆದ ಪೂರ್ವಭಾವಿ ಸಭೆಯಲ್ಲಿ ಒಮ್ಮತ್ತದಿಂದ ಒಪ್ಪಿಗೆ ಸೂಚಿಸಲಾಯಿತು.
ಕಸಾಪ ಅಧ್ಯಕ್ಷ ಶರಣಬಸಪ್ಪ ಕೋಬಾಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಥಮ ಸಭೆಯನ್ನು ಯಾವುದೇ ವಯಕ್ತಿಕ ವಿಚಾರಕ್ಕೆ ಒತ್ತು ಕೊಡದೆ, ಸಮ್ಮೇಳನ ಸಮಿತಿಯ ನಿರ್ಣಯಕ್ಕೆ ಬದ್ದರಾಗಿ ಕನ್ನಡ ನಾಡು, ನುಡಿ, ಶಹಾಬಾದ ತಾಲೂಕಿನ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಸರ್ವರು ಜಾತಿ,ಧರ್ಮ, ರಾಜಕೀಯ ಹೊರತು ಪಡಿಸಿ ಒಮ್ಮತದಿಂದ ಸಮ್ಮೇಳನ ಯಶಶ್ವಿಗೆ ಪ್ರಯತ್ನಿಸೋಣೆ ಎಂದು ಸಭೆಯಲ್ಲಿ ದಸಂಸ ರಾಜ್ಯ ಸಂ.ಸAಚಾಲಕ ಮರೆಪ್ಪ ಹಳ್ಳಿ ಹೇಳಿದರು.
ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ತಾಲೂಕಿನ ಕಲೆ.ಸಾಹಿತ್ಯ ಸಂಸ್ಕೃತಿ ಬಿಂಬಿಸುವ, ಹಳ್ಳಿಗಳ ವಿಶೇಷತೆ ಸಾರುವ ಸ್ಥಬ್ದ ಚಿತ್ರಗಳನ್ನು ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಇರಬೇಕೆಂದು ಸಲಹೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯನ್ನು ಪ್ರಮುಖರು ಸೇರಿ ಚರ್ಚಿಸಿ, ಅಂತಿಮಗೊಳಿಸಲು, ತಾಲೂಕಿನ ಹಿರಿಕಿರಿಯ ಸಾಹಿತಿಗಳ ಹೆಸರನ್ನು ಪರಿಶೀಲಿಸಿ, ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಒಪ್ಪಿಗೆ ಸೂಚಿಸಲಾಯಿತು. ಸಭೆಯಲ್ಲಿ ಭರತ ಧನ್ನಾ, ಸಿದ್ದುಗೌಡ ಅಫಜಲ್ಪೂರ, ನಾಮದೇವ ರಾಠೋಡ, ಮೃತ್ಯುಂಜಯ ಸ್ವಾಮಿ ಹಿರೇಮಠ, ಅಣವೀರ ಇಂಗಿನಶೆಟ್ಟಿ, ಯಲ್ಲಾಲಿಂಗ ಹೈಯಾಳಕರ್, ಕನಕಪ್ಪ ದಂಡಗುಲರಕ, ಎನ್.ಸಿ.ವಾರದ, ಚಂದ್ರಕಾAತ ಗೊಬ್ಬುಕರ್, ಸಿದ್ದಲಿಂಗ ಬಾಳಿ, ಶರಣು ಪಗಲಾಪುರ, ಪೀರಪಾಶಾ ಹೊನಗುಂಟಾ, ರವಿ ಅಲ್ಲಂಶೆಟ್ಟಿ, ಶರಣಗೌಡ ಪಾಟೀಲ, ಗುಂಡಮ್ಮಾ ಮಡಿವಾಳ, ಎನ್.ಸಿ.ವಾರದ, ಸೇರಿದಂತೆ ಹಲವರು ತಮ್ಮ ಅಭಿಪ್ರಾಯ ಮಂಡಿಸಿದರು. ನಗರದ ಪ್ರಮುಖರಾದ ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ, ರಾಜು ಮೇಸ್ತಿç, ಅನೀಲಕುಮಾರ ಇಂಗಿನಶೆಟ್ಟಿ, ಶಿವರಾಜ ಇಂಗಿನಶೆಟ್ಟಿ, ಪ್ರಶಾಂತ ಮರಗೋಳ, ಬಾಬುರಾವ ಪಂಚಾಳ, ನಿಂಗಣ್ಣ ಹುಳಗೋಳ, ಸಿದ್ದಲಿಂಗ ಹಿರೇಮಠ, ಅಜೀಮ್ ಸೇಠ, ಶರಣಗೌಡ ಪೊಲೀಸ್ ಪಾಟೀಲ, ಭೀಮರಾವ ಸಾಳುಂಕೆ, ಕಿರಣ ಕೋರೆ, ಮ.ಮಸ್ತಾನ, ಶರಣು ವಸ್ತçದ ವೇದಿಕೆಯಲ್ಲಿದ್ದರು. ವಿಶ್ವರಾಧ್ಯ ಬಿರಾಳ, ಡಾ.ಅಹ್ಮದ ಪಟೇಲ್, ಶಂಕರ ಜಾನಾ, ನಿಂಗಣ್ಣ ಪೂಜಾರಿ, ಸೋಮಶೇಖರ ನಂದಿಧ್ವಜ, ಅಮೃತ ಮಾನಕರ, ಮಲ್ಲಿಕಾರ್ಜುನ ಘಾಲಿ, ಗಿರಿಮಲ್ಲಪ್ಪ ವಳಸಂಘ, ಜಗನ್ನಾಥ ಎಸ್.ಹೆಚ್, ಚಂದ್ರಕಾAತ ಗೊಬ್ಬುರಕರ, ರತನರಾಜ ಕೋಬಾಳಕರ್, ದಶರಥ ಕೋಟನೂರ, ಶಂಕರ ಅಳ್ಳೋಳಿ, ಮಹ್ಮದ ಉಬೇದುಲ್ಲಾ, ನಿಂಗಣ್ಣ ಸಂಗಾವಿಕರ, ಮಹೇಶ ನಗರದ ಗಣ್ಯರು ಪಾಲ್ಗೊಂಡಿದರು.
ಅಧಿಕಾರಿಗಳ ಗೈರು.
ಪ್ರಥಮ ತಾಲೂಕ ಸಮ್ಮೇಳನ ನಡೆಸಲು ಕರೆದ ಪೂರ್ವ ಭಾವಿ ಸಭೆಗೆ ಕಸಾಪ ಸರ್ವ ಸದಸ್ಯರು, ನಗರ ಗಣ್ಯರು ಸೇರಿದಂತೆ ತಾಲೂಕಿನ ಎಲ್ಲಾ ಸರಕಾರಿ ಇಲಾಖೆ ಅಧಿಕಾರಿಗಳನ್ನು ಸಭೆಗೆ ಅವ್ಹಾನ ನೀಡಲಾಗಿತ್ತು. ಆದರೆ, ತಾಲೂಕಿನ ಸರಕಾರಿ ಕಚೇರಿಗಳ ಯಾವೊಬ್ಬ ಅಧಿಕಾರಿಗಳು ಸಹ ಸಭೆಗೆ ಹಾಜರಾಗದೆ, ಅಥವಾ ತಮ್ಮ ಪರವಾಗಿ ಯಾರದರನ್ನು ಕಳುಹಿಸದೆ, ಕನ್ನಡ ನಾಡು, ನುಡಿ, ಭಾಷೆ ಅಗೌರವ ತೋರಿಸಿದ್ದಲ್ಲದೆ, ಸಾಹಿತ್ಯ ಸಮ್ಮೇಳನಕ್ಕೆ ತಮ್ಮ ಅನಾಸಕ್ತಿ ತೋರಿಸಿರುವದು ಕಂಡು ಬಂದಿತು.
Copyright © 2025 Vijay Times News. All Rights Reserved.
Website by Samanth