ನವರಾತ್ರಿ ಉತ್ಸವ ನಿಮಿತ್ತ ಲೇಖನ
ಶಹಾಬಾದ ಜಾಗೃತ ಜಗದಂಬಾ ಉತ್ಸವ ೪೮ನೇ ವರ್ಷ
ಚಿತ್ರ: ೧ ಎಸ್ಬಿಡಿ ೧ ಶ್ರೀ ಜಗದಂಬಾ ದೇವಿ ದೇವಸ್ಥಾನದಲ್ಲಿ ದೇವಿಯ ಮೂರ್ತಿ.
ನವರಾತ್ರಿಯ ಪ್ರಾರಂಭ ದಿನ ಅಕ್ಟೋಬರ ೩ ರಂದು ಬೆಳಿಗ್ಗೆ ದೇವಿಯ ವಿಶೇಷ ಪೂಜೆಯಿಂದ ೯ ದಿನಗಳು ಕಾಲ ವಿಶೇಷ ಅಲಂಕಾರ ವಿವಿಧ ಪೂಜಾ ಕಾರ್ಯಕ್ರಮದ ಜತೆಗೆ ಪ್ರತಿನಿತ್ಯ ಸಂಜೆ ವಿಶೇಷ ಆರತಿ, ದೇವಿಯ ಅಲಂಕಾರ, ನಡೆಯಲಿವೆ. ನವರಾತ್ರಿ ಉತ್ಸವಕ್ಕೆ ಸಜ್ಜುಗೊಂಡಿದೆ. ಜಗದಂಬಾ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ, ಅಲಂಕಾರದೊAದಿಗೆ ಸಡಗರ, ಸಂಭ್ರಮದಿAದ ಆರಂಭವಾಗಿದ್ದು, ದೇವಿಯ ಉತ್ಸವ ನಿಮಿತ್ತ ಮನೆ ಮನೆಯಲ್ಲಿ ಸ್ವಚ್ಛತೆ ಮಾಡುವುದರ ಮೂಲಕ ದೇವಿಯ ದೀಪವನ್ನು ಹಾಕಿ, ದೇವಿಯ ಘಟ ಸ್ಥಾಪನೆ ಮಾಡಿದ ಮಹಿಳೆಯರು, ಶ್ರದ್ಧಾ, ಭಕ್ತಿಯಿಂದ ದೇವಿಯ ಆರಾಧನೆಗೆ ಉಲ್ಲಾಸದಿಂದ ಪಾಲ್ಗೊಂಡಿದ ದೃಶ್ಯ ಕಂಡು ಬಂತು. ನವರಾತ್ರಿ ಉತ್ಸವಕ್ಕೆ ತನ್ನದೇ ಆದ ವಿಶಿಷ್ಟ ಪರಂಪರೆಯಿದೆ, ಹಾಗಾಗೀ ನಗರದ ಜಗದಂಬಾ ದೇವಿ ದೇವಸ್ಥಾನದಲ್ಲಿ ೯ ದಿನ ಆಚರಿಸುವ ನವರಾತ್ರಿಯಲ್ಲಿ ನವದುರ್ಗೆಯರ ಆರಾಧನೆಯೇ ಪ್ರಧಾನವಾಗಿದೆ. ನಾಡಿನಾದ್ಯಂತ ನವರಾತ್ರಿ ಹಬ್ಬದ ಸಂಭಮದ ನವರಾತ್ರಿ ಅಂದ್ರೆ ನವದುರ್ಗೆಯರ ಹಬ್ಬ ೯ ದಿನಗಳ ಕಾಲ ನಗರದ ಶ್ರೀ ಜಗದಂಬಾ ದೇವಿಯ ನವರಾತ್ರಿಯ ಉತ್ಸವ ಸಂಭ್ರಮದಿAದ ಚಾಲನೆಯಾಗಿದ್ದು, ಶ್ರೀ ಜಗದಂಬಾ ಮಂದಿರ ಕಮಿಟಿಯಿಂದ ಹಲವು ದಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ಭಕ್ತರಲ್ಲಿ ನವರಾತ್ರಿ ಸಂಭ್ರಮ ಮನೆ ಮಾಡಿದೆ. ದೇವಿಯ ಆರತಿಯೊಂದಿಗೆ ಚಾಲನೆಯಾಗಿದ್ದ ೯ ದಿನ ನಿರಂತರ ಕಾರ್ಯಕ್ರಮಗಳನ್ನು ಶ್ರದ್ಧಾ, ಭಕ್ತಿ ಭಾವದಿಂದ ನಡೆಯುತ್ತಿದ್ದು ಸಾವಿರಾರು ಭಕ್ತರು ಸಾಯಂಕಾರ ದೇವಿಯ ಮಹಾಮಂಗಳಾರುತಿಗೆ ಪ್ರತಿದಿನ ದರ್ಶನ ಪಡೆಯಲು ಬರುತ್ತಿದ್ದಾರೆ,
ಗುರುವಾರ ಅಕ್ಟೋಬರ ೩ ರಂದು ಮಧ್ಯಾಹ್ನ ಘಟ ಸ್ಥಾಪನೆ ಮಾಡಲಾಯಿತು. ನವರಾತ್ರಿ ವಿಶೇಷ ಪೂಜೆಗೆ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ದೀಲಿಪ ಯಲಶೆಟ್ಟಿ ಅವರಿಗೆ ಚಾಲನೆ ನೀಡಿಲಾಯಿತು. ರಾತ್ರಿ ವಿಠ್ಠಲ ಮಂದಿರ ಮತ್ತು ಹನುಮಾನ ಮಂದಿರ ಭಾರತ ಚೌಕ ಭಜನಾ ಮಂಡಳಿಯವರಿAದ ಭಜನೆ ನಡೆಯಿತು. ಶುಕ್ರವಾರ ಅ.೪ ರಂದು ಮಧ್ಯಾಹ್ನ ೩ ರಿಂದ ೫ ಗಂಟೆವರೆಗೆ ಮೆಹಂದಿ ಸ್ಪರ್ಧೆ ನಡೆಯಲಿದ್ದು, ಸಂಜೆ ನಡೆಯುವ ಮಹಾಮಂಗಳಆರತಿ ಕಾರ್ಯಕ್ರವನ್ನು ನಗರಸಭೆ ನೂತನ ಅಧ್ಯಕ್ಷೆ ಚಂಪಾಬಾಯಿ ರಾಜು ಮಿಸ್ತಿçà ಅವರು ಚಾಲನೆ ನೀಡಿದರು. ರಾತ್ರಿ ಸಿದ್ಧಾರೂಡ ಭಜನ ಮಂಡಳಿಯವರಿAದ ಭಜನಾ ಕಾರ್ಯಕ್ರಮ ನಡೆಯಲಿದೆ. ಶನಿವಾರ ಅ.೫ ರಂದು ಮಧ್ಯಾಹ್ನ ೩ಕ್ಕೆ ರಂಗೋಲಿ ಸ್ಪರ್ಧೆ ನಡೆಸಿ ಬಹುಮಾನ ವಿತರಣೆ ಮಾಡಿದರು. ಸಂಜೆ ೭ ಗಂಟೆಗೆ ನಡೆಯುವ ಆರತಿ ಕಾರ್ಯಕ್ರವನ್ನು ನಗರ ಪೊಲೀಸ್ ಠಾಣೆಯ ಪಿಐ ನಟರಾಜ ಲಾಡೆ ಅವರು ಚಾಲನೆ ನೀಡಿದರು. ರಾತ್ರಿ ಭಜನಾ ಕಾರ್ಯಕ್ರಮ. ಭಾನುವಾರ ಅ.೬ ರಂದು ಮಧ್ಯಾಹ್ನ ೩ ಕ್ಕೆ ಚಿತ್ರಕಲೆ ಸ್ಪರ್ಧೆ ನಡೆಸಿ ಬಹುಮಾನ ವಿತರಣೆ ಮಾಡಲಾಯಿತು. ಸಂಜೆ ೭ ಕ್ಕೆ ನಡೆಯುವ ಆರತಿ ಕಾರ್ಯಕ್ರವನ್ನು ಡಿವಾಯ್ ಎಸ್ಪಿ ಶಂಕರಗೌಡ ಪಾಟೀಲ್ ಅವರು ಚಾಲನೆ ನೀಡಿದರು. ರಾತ್ರಿ ಭಜನಾ ಕಾರ್ಯಕ್ರಮ ನಡೆಯಿತು. ಸೋಮವಾರ ಅ.೭ ರಂದು ಮಧ್ಯಾಹ್ನ ಕುಂಕಮಾರ್ಚನೆ, ಸಹಸ್ರ ನಾಮಾವಳಿ ಜ್ಞಾನೇಶ್ವರ ನನ್ನಾವರೆ ಅವರಿಂದ ಸಂಜೆ ನಡೆಯುವ ಆರತಿ ಕಾರ್ಯಕ್ರವನ್ನು ಉದ್ಯಮಿ ಆದಿತ್ಯ ವರ್ಮಾ ಅವರು ಚಾಲನೆ ನೀಡಿದರು. ನಂತರ ಭಜನಾ ಕಾರ್ಯಕ್ರಮ ನಡೆಯಿತು. ಮಂಗಳವಾರ ೮ ರಂದು ಮಧ್ಯಾಹ್ನ ಮಾರವಾಡಿ ಮಹಿಳಾ ಮಂಡಲ ಇವರಿಂದ ರಜ್ಜಕ ಕಾರ್ಯಕ್ರಮ, ಸಂಜೆ ೭ಕ್ಕೆ ನಡೆಯುವ ಮಹಾಮಂಗಳಾರತಿಯನ್ನು ತಹಶೀಲ್ದಾರ ಜಗದೀಶ ಚೌರ ಅವರು ಚಾಲನೆ ನೀಡಿದರು. ರಾತ್ರಿ ಬಸವ ಸಮಿತಿ ಭಜನಾ ಮಂಡಳ ಅವರಿಂದ ಕಾರ್ಯಕ್ರಮ ನಡೆಯಿತು. ಬುಧವಾರ ಅ.೯ ರಂದು ಮಧ್ಯಾನ ವಿಠ್ಠಲ್ ಮಂದಿರ ಮಹಿಳಾ ಭಜನಾ ಮಂಡಳಿಯವರಿAದ ಭಜನೆ ನಡೆಯಲಿದ್ದು, ಸಂಜೆ ೭ಕ್ಕೆ ನಡೆಯುವ ಮಹಾಮಂಗಳಾರತಿಯನ್ನು ಜಯಶ್ರೀ ಬಸವರಾಜ ಮತಿಮಡು ಅವರು ಚಾಲನೆ ನೀಡಲಿದ್ದಾರೆ. ಗುರುವಾರ ಅ.೧೦ ರಂದು ಬೆಳಗ್ಗೆ ಹೋಮಹವನ ವಾಸುದೇವಾಚಾರ್ಯ ಜೋಷಿ ಅವರಿಂದ ಹಸ್ತದಿಂದ. ನಂತರ ಶ್ರೀದೇವಿ ಸ್ತುತಿ ಹೋಮ ಚಂದ್ರಕಾAತ ನಾಗುರಾವಸಾ ಮೆಂಗಜಿ ದಂಪತಿಯವರ ವತಿಯಿಂದ ನಡೆಯಲಿದೆ. ಮಧ್ಯಾನ್ ಭಜನೆ ಕಾರ್ಯಕ್ರಮ ನಡೆಯಲಿದೆ. ಸಂಜೆ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ. ಸಂಜೆ ೭ಕ್ಕೆ ನಡೆಯುವ ಮಹಾಮಂಗಳಾರತಿಯನ್ನು ಮಹೇಶ ಸಚ್ಚದೇವ ಅವರಿಂದ ಚಾಲನೆ ನೀಡಲಾಗುತ್ತದೆ. ರಾತ್ರಿ ೧೦ ಗಂಟೆಗೆ ಹನುಮಾನ ಮಂದಿರ ಭಾರತ ಚೌಕ ಹಾಗೂ ವಿಠ್ಠಲ ಮಂದಿರ ಭಜನ ಮಂಡಳಿ ಇವರಿಂದ ನಡೆಯಲಿದೆ. ಶುಕ್ರವಾರ ಅ.೧೧ ರಂದು ಮಹಾನವಮಿ (ಖಂಡಿಪೂಜೆ) ಸಾಯಂಕಾಲ ೭ ಗಂಟೆಗೆ ಮಹಾಮಂಗಳಾರತಿ ಉದ್ಯಮಿ ವಿಜಯಕುಮಾರ ಮುಟ್ಟತ್ತಿ ಅವರಿಂದ. ಶನಿವಾರ ಅ.೧೨ ರಂದು ವಿಜಯದಶಮಿ ಸಂಜೆ ಮಹಾಮಂಗಳಾರತಿ ವಿಶ್ವ ಹಿಂದೂ ಪರಿಷದ ಅಧ್ಯಕ್ಷರಾದ ರಾಮು ಕುಸಾಳೆ ಅವರಿಂದ ಚಾಲನೆ. ರಾತ್ರಿ ೧೨ ಗಂಟೆಗೆ ಜೋಗುಳ ಪದಗಳೊಂದಿಗೆ ಶಯನೋತ್ಸವ ಪೂಜೆಯನ್ನು ಶಿಕ್ಷಣ ಪ್ರೇಮಿ ಭೀಮಾಶಂಕರ ಮುತ್ತಟ್ಟಿ ಅವರಿಂದ ನೆರವೇರಿಸಲಾಗುತ್ತದೆ. ಅ.೧೭ ರಂದು ಹುಣ್ಣಿಮೆ ದೇವಿಗೆ ಪ್ರಾರ್ಥನೆಯೊಂದಿಗೆ ನಿದ್ದೆಯಿಂದ ಜಾಗೃತಗೊಳಿಸಲಾಗುವುದು. ನಂತರ ಶ್ರೀದೇವಿಯ ನಿತ್ಯಾಲಂಕಾರ ಹಾಗೂ ಪೂಜೆ, ಆರತಿ, ಸಂಜೆ ದಾನಿಗಳಿಗೆ ಹಾಗೂ ಭಕ್ತರಿಗೆ ಸನ್ಮಾನ ಕಾರ್ಯಕ್ರಮ. ನಂತರ ಆರತಿ, ಪಲ್ಲಕ್ಕಿ ಉತ್ಸವ ನಡೆಯಲಿದೆ. ಅ.೧೮ ರಂದು ದೇವಿಯ ಮಹಾಮಂಗಳಾರತಿ ನಂತರ ಮಧ್ಯಾಹ್ನ ಮಹಾಪ್ರಸಾದ ಕಾರ್ಯಕ್ರಮ ನಡೆಯಲಿದೆ. ಮಹಾಪ್ರಸಾದ ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವರು ದೇವಸ್ಥಾನ ಕಚೇರಿಗೆ ಬಂದು ಹೆಸರು ನೊಂದಿಸಬೇಕೆAದು ಜಗದಂಬಾ ದೇವಿ ದೇವಸ್ಥಾನದ ಅಧ್ಯಕ್ಷರಾದ ದಿಲೀಪ ಯಲಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Copyright © 2025 Vijay Times News. All Rights Reserved.
Website by Samanth