ವೀರಶೈವ ವಿದ್ಯಾರ್ಥಿ ಘಟಕಕ್ಕೆ ಅರುಣ ಸಾತಿಹಾಳ ನೇಮಕ
ವಿಜಯ ಟೈಮ್ಸ್ ನ್ಯೂಸ್ ಕಲಬುರಗಿ
ಶಹಾಬಾದ ನಗರದ ಯುವಕ ಅರುಣ ಬಸವರಾಜ ಸಾತಿಹಾಳ ಅವರು ಅಖಂಡ ಕರ್ನಾಟಕ ವೀರಶೈ ಲಿಂಗಾಯತ ಸಮಾಜದ ವಿದ್ಯಾರ್ಥಿ ಘಟಕದ ತಾಲೂಕ ಅಧ್ಯಕ್ಷರಾಗಿ ನೇಮಮಾಡಲಾಗಿದೆ ಎಂದು ವಿದ್ಯಾರ್ಥಿ ಘಟಕದ ರಾಜ್ಯಾಧ್ಯಕ್ಷರಾದ ಚೇತನ ಪ್ರಭುಲಿಂಗಪ್ಪ ಅವರು ತಿಳಿಸಿದ್ದಾರೆ. ವೀರಶೈವ ಲಿಂಗಾಯತ ಸಮಾಜದ ಸಂಘಟನೆಯ ತತ್ವಸಿದ್ಧಾಂತ, ಶಿಸ್ತು ಮತ್ತು ನಾವೆಲ್ಲರೂ ಒಂದೇ ಎಂದು ಕಾರ್ಯನಿರ್ವಹಿಸುವುದು. ವಿದ್ಯಾರ್ಥಿ ಘಟಕದ ಜವಾಬ್ದಾರಿಯನ್ನು ವಹಿಸಿಕೊಂಡು ಸಂಘಟನೆಯ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜವನ್ನು ಒಗ್ಗೂಡಿಸಿ, ಸಂಘಟಿಸಿ, ಸದಸ್ಯರನ್ನಾಗಿ ಮಾಡಿ ಸಂಘಟನೆಯ ಕಲ್ಯಾಣಕ್ಕಾಗಿ ಶ್ರಮಿಸಬೇಕೆಂದು ವಿದ್ಯಾರ್ಥಿ ಘಟಕದ ರಾಜ್ಯಾಧ್ಯಕ್ಷರಾದ ಚೇತನ ಪ್ರಭುಲಿಂಗಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Copyright © 2025 Vijay Times News. All Rights Reserved.
Website by Samanth