Breaking News


Latest News

View All

ಅಲ್ದಿಹಾಳ ಮರಿಯಮ್ಮ ದೇವಿ ಜಾತ್ರೆ

ಸಕಲ ಸಿದ್ಧತೆಯೊಂದಿಗೆ ದೇವಿ ಜಾತ್ರೆ
ಅಲ್ದಿಹಾಳ ಮರಿಯಮ್ಮ ದೇವಿ ಜಾತ್ರೆ – ಕುಂಭ ಮೆರವಣಿಗೆ - ಸಂಗೀತ ಕಾರ್ಯಕ್ರಮ – ಧರ್ಮಸಭೆ 


ತಾಲೂಕಿನ ಸುಕ್ಷೇತ್ರ ಅಲ್ದಿಹಾಳ ಗ್ರಾಮದಲ್ಲಿ ಶಕ್ತಿ ದೇವತೆ ಶ್ರೀಮರಿಯಮ್ಮದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಮಂಗಳವಾರ ದಿ.೨೭ ರಿಂದ ಪ್ರಾರಂಭವಾಗುತ್ತಿದೆ. ೩ ದಿನಗಳ ಕಾಲ ನಡೆಯುವ ಜಾತ್ರಾಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ದೇವಸ್ಥಾನದ ಪೀಠಾಧಿಪತಿ ಪೂಜ್ಯ ರಾಜು ಪೂಜಾರಿ ಅವರು ತಿಳಿಸಿದರು. 
ದಿ.೨೭ ರಂದು ಬೆಳಗ್ಗೆ ೬ ಗಂಟೆಗೆ ಮರಿಯಮ್ಮ ದೇವಿಯ ಮೂರ್ತಿಗೆ ಮಹಾರುದ್ರಾಭಿಷೇಕ ವಿವಿಧ ಪೂಜೆಗಳನ್ನು ನೇರವೇರಿಸಿದ  ನಂತರ ಮಧ್ಯಾಹ್ನ ೧೧ ರಿಂದ ಮಹಾಪ್ರಸಾದ ನಡೆಯುತ್ತದೆ. 
ಸಂಜೆ ೬ ಗಂಟೆಗೆ ಕಟ್ಟಿಮನಿ ಹಿರೇಮಠ ಸಂಸ್ಥಾನ ಮಠದ ಪೂಜ್ಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರರ ಸಾನಿಧ್ಯದಲ್ಲಿ ಧರ್ಮಸಭೆ ಜರುಗುತ್ತದೆ. ಶ್ರೀನಿವಾಸ ಸರಡಗಿಯ ಪೂಜ್ಯರಾದ ಅಪ್ಪಾರಾವ ದೇವಿ ಮುತ್ಯಾ ಅವರು ನೇತೃತ್ವ ವಹಿಸಲಿದ್ದಾರೆ. ಕಟ್ಟಿಸಂಗಾವಿಯ ವೇದಿ ಮೂರ್ತಿ ಬಸವಯ್ಯ ಸ್ವಾಮಿ ತಾತಾ ಮಹಾನಗರದ ಯಲ್ಲಾಲಿಂಗ ಪುಣ್ಯಾಶ್ರಮದ ಪೀಠಾಧಿಪತಿ ಜೇಮಸಿಂಗ ಮಹಾರಾಜರು ಅಧ್ಯಕ್ಷತೆ ವಹಿಸಲಿದ್ದು. ದೇವಸ್ಥಾನದ ಪೀಠಾಧಿಪತಿ ಪೂಜ್ಯ ರಾಜು ಪೂಜಾರಿ ಹಾಗೂ ರಾಜಕೀಯ ಮುಖಂಡರು ಸಮಾಜ ಸೇವಕರು ಧರ್ಮಸಭೆಯಲ್ಲಿ ಪಾಲ್ಗೊಳ್ಳವರು. ಧರ್ಮಸಭೆಯ ನಂತರ ವಾಸು ಚವ್ಹಾಣ್ ಅವರ ವಿಜಯ ಮೆಲೋಡಿಸ್ ಸಂಗೀತ ತಂಡದಿAದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. 
ಬುಧವಾರ ದಿ.೨೮ ರಂದು ಮಾಣಿಕ ಗುತ್ತೇದಾರ ಅವರ ಮನೆಯಿಂದ ಘಟವನ್ನು ಗ್ರಾಮದ ಮುಖ್ಯ ರಸ್ತೆಯ ಮೂಲಕ ವಿವಿಧ ವಾದ್ಯಗಳೊಂದಿಗೆ ಭವ್ಯವಾಗಿ ಮೆರವಣಿಗೆ ದೇವಸ್ಥಾನಕ್ಕೆ ತಲುಪಲಿದ್ದು, ಮಧ್ಯಾಹ್ನ ರಫಿಕ್ ಮಾಲಿ ಪಟೇಲ್ ಅವರ ಮನೆಯಿಂದ ದೇವಿಗೆ ಛಾಜಾ ತಲುಪುವುದು ನಂತರ ಕಾಶಪ್ಪ ದೊಡ್ಡಮನಿ ಅವರು ಮನೆಯಿಂದ ಕುಂಭ, ಕಳಸ ದೇವಸ್ಥಾನಕ್ಕೆ ತರಲಾಗುತ್ತದೆ. ರಾತ್ರಿ ೯ ಗಂಟೆಗೆ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದ್ದು.
ಗುರುವಾರ ದಿ.೨೯ ರಂದು ಬೆಳಗ್ಗೆ ೮ ಕ್ಕೆ ಜಂಗಿ ಪೈಲವಾನರ ಕುಸ್ತಿ ಪಂದ್ಯ ನಡೆಯಲಿದ್ದು. ಶಕ್ತಿ ದೇವತೆ ಶ್ರೀ ಮರಿಯಮ್ಮ ದೇವಿಯ ಜಾತ್ರೆ ವಿವಿಧ ರಾಜ್ಯದಿಂದ ಭಕ್ತರು ಆಗಮಿಸಿ ದೇವಿಗೆ ಭಕ್ತಿಯನ್ನು ಸಮರ್ಪಿಸಲಾಗುತ್ತದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದರು. 
ಮುಂಬೈಯ ರಾಜು ಪವಾರ, ರಫೀಕ ಪಟೇಲ್ ಮಾಲಿಗೌಡ, ದೇವಸ್ಥಾನ ಸಮಿತಿಯವರು ಮಾಹಿತಿಯನ್ನು ನೀಡಿದ್ದಾರೆ. 


“ ಅಲ್ದಿಹಾಳ ಮರಿಯಮ್ಮ ದೇವಿಯ ದೇವಸ್ಥಾನದಲ್ಲಿ ಸರ್ವ ಸಮಾಜದವರು ಸೇವೆ ಮಾಡಿ ಆರಾಧನೆ ಮಾಡುವ ವಾಡಿಕೆ ಇದೆ, ಭಕ್ತರಿಗೆ ಜೀವನದಲ್ಲಿ ಒಳಿತು ಮಾಡುವ ದೇವಿಯ ಭಕ್ತರು ದೇಶದ ವಿವಿಧ ಕಡೆ ವಾಸವಾಗಿದ್ದು, ಜಾತ್ರೆಯಲ್ಲಿ ಬಂದು ದೇವಿಯ ಸೇವೆಯನ್ನು ಮಾಡಿ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ.  - ಪೂಜ್ಯ ರಾಜು ಪೂಜಾರಿ, ಪೀಠಾಧಿಪತಿ ಮರಿಯಮ್ಮ ದೇವಿ ದೇವಸ್ಥಾನ. 


ವೀರಶೈವ ವಿದ್ಯಾರ್ಥಿ ಘಟಕಕ್ಕೆ ಅರುಣ ಸಾತಿಹಾಳ ನೇಮಕ


ವೀರಶೈವ ವಿದ್ಯಾರ್ಥಿ ಘಟಕಕ್ಕೆ ಅರುಣ ಸಾತಿಹಾಳ ನೇಮಕ
ವಿಜಯ ಟೈಮ್ಸ್ ನ್ಯೂಸ್ ಕಲಬುರಗಿ
ಶಹಾಬಾದ ನಗರದ ಯುವಕ ಅರುಣ ಬಸವರಾಜ ಸಾತಿಹಾಳ ಅವರು ಅಖಂಡ ಕರ್ನಾಟಕ ವೀರಶೈ ಲಿಂಗಾಯತ ಸಮಾಜದ ವಿದ್ಯಾರ್ಥಿ ಘಟಕದ ತಾಲೂಕ ಅಧ್ಯಕ್ಷರಾಗಿ ನೇಮಮಾಡಲಾಗಿದೆ ಎಂದು ವಿದ್ಯಾರ್ಥಿ ಘಟಕದ ರಾಜ್ಯಾಧ್ಯಕ್ಷರಾದ ಚೇತನ ಪ್ರಭುಲಿಂಗಪ್ಪ ಅವರು ತಿಳಿಸಿದ್ದಾರೆ. ವೀರಶೈವ ಲಿಂಗಾಯತ ಸಮಾಜದ ಸಂಘಟನೆಯ ತತ್ವಸಿದ್ಧಾಂತ, ಶಿಸ್ತು ಮತ್ತು ನಾವೆಲ್ಲರೂ ಒಂದೇ ಎಂದು ಕಾರ್ಯನಿರ್ವಹಿಸುವುದು. ವಿದ್ಯಾರ್ಥಿ ಘಟಕದ ಜವಾಬ್ದಾರಿಯನ್ನು ವಹಿಸಿಕೊಂಡು ಸಂಘಟನೆಯ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜವನ್ನು ಒಗ್ಗೂಡಿಸಿ, ಸಂಘಟಿಸಿ, ಸದಸ್ಯರನ್ನಾಗಿ ಮಾಡಿ ಸಂಘಟನೆಯ ಕಲ್ಯಾಣಕ್ಕಾಗಿ ಶ್ರಮಿಸಬೇಕೆಂದು ವಿದ್ಯಾರ್ಥಿ ಘಟಕದ ರಾಜ್ಯಾಧ್ಯಕ್ಷರಾದ ಚೇತನ ಪ್ರಭುಲಿಂಗಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಎಸ್‌ಬಿಐ ಬ್ಯಾಂಕ ವತಿಯಿಂದ ಪತ್ರಕರ್ತರಿಗೆ ಸನ್ಮಾನ

ಎಸ್‌ಬಿಐ ಬ್ಯಾಂಕ ವತಿಯಿಂದ ಪತ್ರಕರ್ತರಿಗೆ ಸನ್ಮಾನ
ವಿಜಯ ಟೈಮ್ಸ್ ನ್ಯೂಸ್ 

ಶಹಾಬಾದ ತಾಲೂಕಿನ ಭಂಕೂರ ಎಸ್‌ಬಿಐ ಬ್ಯಾಂಕ ವತಿಯಿಂದ ತಾಲೂಕಿನ ಪತ್ರಕರ್ತರಾದ ವಾಸುದೇವ ಚವ್ಹಾಣ, ಕೆ.ರಮೇಶ ಭಟ್ಟ, ನಿಂಗಣ್ಣ ಜಂಬಗಿ, ಲೋಹಿತ ಕಟ್ಟಿ, ಶಿವುಕುಮಾರ ಕುಸಾಳೆ, ಖಾಜಾ ಪಟೇಲ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕ ವ್ಯವಸ್ಥಾಪಕ ದೀಪಕ ಕುಮಾರ, ಗ್ರಾಪಂ.ಅಧ್ಯಕ್ಷ ಶರಣಬಸಪ್ಪ ಧನ್ನಾ ಸುರೇಶ ಮೆಂಗನ್, ಭರತ ಧನ್ನಾ, ಶಂಕರ ಜಾನಾ, ಶಕೀಲ ಪಟೇಲ, ಜಾಕೀರ ಸೇಠ, ಶಿವಯೋಗಿ ಬಣಕಾರ ಇತರರು ಇದ್ದರು. 


ಎಸ್‌ಬಿಐನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ.

ಶಹಾಬಾದ ತಾಲೂಕಿನ ಭಂಕೂರನ ಎಸ್‌ಬಿಐ ಬ್ಯಾಂಕ್‌ನಿAದ ಡಾ.ಅಂಬೇಡ್ಕರ ಜಯಂತೋತ್ಸವ ನಿಮಿತ್ತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕರಿಸಲಾಯಿತು. ವ್ಯವಸ್ಥಾಪಕ ದೀಪಕ ಕುಮಾರ, ಗ್ರಾಪಂ.ಅಧ್ಯಕ್ಷ ಶರಣಬಸಪ್ಪ ಧನ್ನಾ, ಮುಖಂಡರಾದ ಸುರೇಶ ಮೆಂಗನ್, ಭರತ ಧನ್ನಾ, ಮೌಲಾನಾ ಇತರರು ಇದ್ದರು. 

ಡಾ.ಅಂಬೇಡ್ಕರ ಜಯಂತಿ ಪ್ರಯುಕ್ತ
ಎಸ್‌ಬಿಐನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ.
ವಿಜಯ ಟೈಮ್ಸ್ ನ್ಯೂಸ್ ಕಲಬುರಗಿ
ತಾಲೂಕಿನ ಭಂಕೂರನ ಎಸ್‌ಬಿಐ ಬ್ಯಾಂಕ್ ವತಿಯಿಂದ ಡಾ.ಅಂಬೇಡ್ಕರ ಅವರು ೧೩೪ನೇ ಜಯಂತೋತ್ಸವ ನಿಮಿತ್ತ ಬ್ಯಾಂಕ್ ವ್ಯಾಪ್ತಿಗೆ ಬರುವ ಗ್ರಾಮಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಹಾಗೂ ಪತ್ರಕರ್ತರಿಗೆ, ಸತ್ಕರಿಸುವ ಮೂಲಕ ಆಚರಿಸಲಾಯಿತು. 
ಬ್ಯಾಂಕ್ ವ್ಯವಸ್ಥಾಪಕ ದಿಲೀಪ ಕುಮಾರ ಅವರು ಡಾ.ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ,ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಅಂಬೇಡ್ಕರ ೧೩೪ನೇ ಜಯಂತೋತ್ಸವ ಸಮಿತಿ ಗೌರವ ಅಧ್ಯಕ್ಷ ಸುರೇಶ ಮೆಂಗನ್ ಮಾತನಾಡಿ ಬ್ಯಾಂಕ್‌ನಲ್ಲಿ ಪ್ರತಿಭಾವಂತ ಮಕ್ಕಳಿಗೆ ಸತ್ಕರಿಸಿ, ಅವರನ್ನು ಉತ್ತೇಜಿಸುವ ಕಾರ್ಯ ಶ್ಲಾಘನೀಯವಾಗಿದೆ. ಅಂಬೇಡ್ಕರ ಬದುಕು, ಸಾಧನೆ ಮಕ್ಕಳಿಗೆ ಹೊಸ ಸ್ಫೂರ್ತಿ ತರಲಿದೆ ಎಂದು ಹೇಳಿದರು. ಪತ್ರಕರ್ತ ಲೋಹಿತ ಕಟ್ಟಿ, ಮೌಲಾನಾ  ಮಾತನಾಡಿದರು.  
ಕಳೆದ ಬಾರಿ ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಕರಿಷ್ಮಾ, ಪೂಜಾ, ಮಲ್ಲಿಕಾರ್ಜುನ, ಪ್ರೇಮಾ, ಭಾವನಾ, ತರುಣ ವಿಜಯಶ್ರೀ ಅವರನ್ನು ಹಾಗೂ ಪತ್ರಕರ್ತರನ್ನು ಸತ್ಕರಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಪಂ.ಅಧ್ಯಕ್ಷ ಶರಣಬಸಪ್ಪ ಧನ್ನಾ, ಶಿವಯೋಗಿ ಬಣಕಾರ, ಅನೀಲ ಮೈನಾಳಕರ್, ಸುರೇಶ ಕುಲಕರ್ಣಿ ಮರಲಿಂಗ ಯಾದಗಿರಿ, ಶಕೀಲ ಪಟೇಲ, ಜಾಕೀರ ಸೇಠ, ಸಿಬ್ಬಂದಿಯವರಾದ ಮಲ್ಲಿಕಾರ್ಜುನ, ವಿಜಯಕುಮಾರ ಸೇರಿದಂತೆ ಇತರರು ಇದ್ದರು. 
ಭರತ ಧನ್ನಾ ನಿರೂಪಿಸಿದರು. ಶಂಕರ ಜಾನಾ ಕ್ರಾಂತಿ ಗೀತೆ ಹಾಡಿದರು. ಮೌಲಾನ ವಂದಿಸಿದರು.


Advertisement

Advertisement

Copyright © 2025 Vijay Times News. All Rights Reserved. Website by Samanth